ಕರ್ನಾಟಕದ ಆರ್ಥಿಕ ರಾಜಧಾನಿಗೆ ಮೂಲ ಸೌಕರ್ಯಗಳ ಕೊರತೆ ಇದೆ. ಜೊತೆಗೆ ಪ್ರವಾಸಿ ತಾಣಗಳಿಗೆ ಪ್ರೋತ್ಸಾಹ ಕಡಲ ಕಿನರೆಗಳ ಆಧುನೀಕರಣ ಮಾಡಬೇಕಾಗಿದೆ. ಮೊದಲನೆಯದಾಗಿ ಮೂಲ ಸೌಕರ್ಯಗಳ ಅಭಿವೃದ್ಧಿ ಚತುಷ್ಪಥ ರಸ್ತೆಗಳ, ರಸ್ತೆಗಳ ಅಗಲೀಕರಣ , ಉನ್ನತೀಕರಣ ಆಧುನೀಕರಣ ಮಾಡಬೇಕು.
ಪ್ರತಿಯೊಂದು ನಗರವೂ ವೇಗವಾಗಿ ಬೆಳೆಯಬೇಕಾಗಿದೆ. ಮೂಲ ಸೌಕರ್ಯಗಳನ್ನು ಪೂರೈಸಿದರೆ ಅಭಿವೃದ್ಧಿಯಾಗುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಘಟಿಸುವ ಕೋಮು ಗಲಭೆ, ಬಂದ್, ಉಗ್ರರ ಹಾವಳಿಯಿಂದ ಅನೇಕ ಕೈಗಾರಿಕೋದ್ಯಮಿಗಳು ಹಿನ್ನಡೆಯುತ್ತಿದ್ದಾರೆ. ಇದು ಕಪ್ಪು ಚುಕ್ಕೆಯಾಗಿದೆ. ಇದಕ್ಕೆ ಕೋಮು ಸಾಮರಸ್ಯ, ಸಮಾನತೆ, ಸೌಹಾರ್ದತೆಯ ಕಾಪಾಡಬೇಕು. ಸಕಾಲದ ಪೊಲೀಸ್ ವ್ಯವಸ್ಥೆ ಬೇಕು.
ಕರ್ನಾಟಕದಲ್ಲಿ ವೇಗವಾಗಿ ಮುನ್ನಡೆದ ನಗರದ ಪೈಕಿ ಮಂಗಳೂರು ಮೊದಲನೆಯದಾಗಿದೆ. ದೇಶದ ಶ್ರೇಷ್ಠ ಹತ್ತು ಬಂದರುಗಳ ಪೈಕಿ ಮಂಗಳೂರು ಸೇರಿದೆ. ಈ ನಗರಕ್ಕೆ ಸಂಚಾರ ದಟ್ಟಣೆಗೆ ರೈಲ್ವೆಯನ್ನು ಸುಧಾರಣೆಗೊಳಿಸಬೇಕು.
ಒಂದು ಆರ್ಥಿಕ ಚೌಕಟ್ಟಿನ ನೆಲೆಯಲ್ಲಿ ಕಲ್ಪಿಸಿದಾಗ ಈ ನಗರದ (ಕರಾವಳಿ ಜಿಲ್ಲೆಗಳು) ಶೈಕ್ಷಣಿಕವಾಗಿ ಮುಂದುವರೆದಿದೆ.
ಈ ಸಾಲಿನ ಜನರ ಭಾಷೆ, ಶೈಲಿ, ಸಂಸ್ಕೃತಿಯಿಂದ ಹಾಗೂ ಹೊಟೇಲ್ ಉದ್ಯಮಿಗಳ ಮೂಲಕ ಜಗತ್ತಿದನ್ನು ಗುರುತಿಸುವಂತೆ ಮಾಡುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದ ಸಾಧನೆಯಿಂದ ಇಡೀ ದೇಶಕ್ಕೆ ದೇಶ ಗುರುತಿಸುತ್ತಿದೆ.
ಮೂಲ ಸೌಕರ್ಯಗಳನ್ನು ಕಲ್ಪಿಸಿ , ಅಡೆತಡೆಗಳನ್ನು ಶಾಶ್ವತವಾಗಿ ನಿವಾರಿಸಿದಾಗ ಬಂಡವಾಳದಾರರು, ಕೈಗಾರಿಕೋದ್ಯಮಿಗಳ ಆಗಮನದಿಂದ ಪ್ರವಾಸಿತಾಣಗಳು, ಸೇವಾ ಕ್ಷೇತ್ರ ಕೈಗಾರಿಕಾ ರಂಗದ ಅಭಿವೃದ್ಧಿಯಾಗುತ್ತಿದೆ. ಆದರೆ ಜಗತ್ತಿನ ಭೂಪಟದಲ್ಲಿ ಸ್ಥಾನ ಪಡೆಯುತ್ತದೆ.
ಕರ್ನಾಟಕದ ಪತ್ರಿಕೆಗಳ ಪೈಕಿ ಸಮಗ್ರ ಜ್ಞಾನಕ್ಕೆ ....ನೀಡುವ ವಿಜಯಕರ್ನಾಟಕ ವೊಂದಿದ್ದರೆ ನಗರ ಮುಂದುವರೆಯುತ್ತಿದೆ ಎಂಬ ಮಾತನ್ನು ಹೇಳಲೇ ಬೇಕು.
ಏಕೆಂದರೆ ಈ ಪತ್ರಿಕೆಯ ಸಕಾಲದ ಕಾರ್ಯಪ್ರವೃತ್ತತೆಯಿಂದ ಅತಿ ಹೆಚ್ಚು ಪ್ರಸಾರವುಳ್ಳ ಪತ್ರಿಕೆಯಿಂದಾಗಿ ಹೂಡಿಕೆದಾರರನ್ನು ಆಹ್ವಾನಿಸುವಂತೆ ಮಾಡುತ್ತಿದೆ. ಜೊತೆಗೆ ಕುಂದುಕೊರತೆಗಳನ್ನು ಪರಿಹರಿಸುವಲ್ಲಿ ದಿಟ್ಟ ಕಾರ್ಯತನದಿಂದ, ಚಾಣಕ್ಷತನ ಹೊಂದಿದೆ. ವಿಜಯ ಕರ್ನಾಟಕ ನಿಮಗೊಂದು ಅಭಿನಂದನೆಗಳು.
-ರಮಾನಂದ ಅಜೆಕಾರು.
ಶುಕ್ರವಾರ, ಅಕ್ಟೋಬರ್ 24, 2008
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ