ಶನಿವಾರ, ಅಕ್ಟೋಬರ್ 25, 2008

ನಕಲಿ ವೈದ್ಯರು

ಬುದ್ಧಿವಂತರ ನಾಡು ಕರ್ನಾಟಕ. ಅದರಲ್ಲೂ ಮಂಗಳೂರು ಹಾಗೂ ಸುತ್ತಮುತ್ತಲಿನ ಕರಾವಳಿ ಪ್ರದೇಶದ ಜನರು ಬುದ್ಧಿವಂತರು. ಆದರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ನಕಲಿ ವೈದ್ಯರ ಹಾವಳಿ ಮಿತಿಮೀರುತ್ತಿದೆ. ಯಾವುದೇ ವೈದ್ಯಕೀಯ ಪದವಿ ಇಲ್ಲದೆ ರಾಜಾರೋಷವಾಗಿ ಜಿಲ್ಲೆಯ ಎಲ್ಲ ಕಡೆಯಲ್ಲೂ ಈ ನಕಲಿ ವೈದ್ಯರು ಜನರ ಶೋಷಣೆ ಮಾಡುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ಹಾಗೂ ಕುಟುಂಬ ವೈದ್ಯರ ಸಂಘ ಎಷ್ಟೇ ಪ್ರಯತ್ನ ಪಟ್ಟರೂ ಇದನ್ನು ಸಂಪೂರ್ಣ ಹತೋಟಿಯಲ್ಲಿಡಲು ಸಾಧ್ಯವಾಗಿಲ್ಲ. ಹಾಗಾಗಿ ಜಿಲ್ಲೆಯ ಜನತೆ ಎಚ್ಚೆತ್ತುಕೊಂಡಾಗ ಮಾತ್ರ ಇದನ್ನು ಸಂಪೂರ್ಣವಾಗಿ ಹತ್ತಿಕ್ಕಬಹುದಾಗಿದೆ.
* ಡಾ.ವಿಷ್ಣು ಪ್ರಭು
ಕಣ್ಣಿನ ವೈದ್ಯರು, ಮಂಗಳೂರು

ನಮ್ಮ ಸಂಸ್ಕೃತಿ ಮತ್ತು ರಕ್ಷಣೆ
ಸತ್ಯಧರ್ಮದಿಂದ ಬಾಳುವುದು, ಮಾಡಿದ ಕೆಲಸಗಳಲ್ಲಿ ತಪ್ಪುಗಳಾದಲ್ಲಿ ಮನ್ನಿಸಿ-ಅನುಗ್ರಹ ಬೇಡುವುದು, ಕುಟುಂಬ ಸದಸ್ಯರು ಒಮ್ಮನಸ್ಸಿನಿಂದ ಕೂಡಿ ಬಾಳುವುದು ಈ ನೆಲದ ವಿಶಿಷ್ಟ ಸಂಸ್ಕೃತಿ. ಕರಾವಳಿಯ ನಿಜವಾದ ಜೀವನ ಶೈಲಿ ಪ್ರಕೃತಿಯೊಂದಿಗೆ ಹೊಂದಿಕೊಂಡು ಬಿಡಿ ಬಿಡಿಯಾಗಿ ಬದುಕುವ ವಿಶಿಷ್ಟ ಸ್ವತಂತ್ರ, ಸ್ವಾಭಿಮಾನಿ ಸಂಸ್ಕೃತಿ.
ಆಧುನಿಕತೆ, ನಗರೀಕರಣ, ಜಾಗತೀಕರಣದ ಧಾವಂತ ಈ ನೆಲದ ಸೌಹಾರ್ದ, ಶಾಂತಾ ವಾತಾವರಣ ಒಳಗೊಂಡಂತೆ ಬೆಳೆಯುತ್ತಿದೆ. ಸಂಸ್ಕೃತಿ ರಕ್ಷಣೆ ಆಗಬೇಕಾಗಿದ್ದಲ್ಲಿ ವಿದ್ಯಾಸಂಸ್ಥೆಗಳು ನಿಗದಿತ ಪಠ್ಯದ ಹೊರತಾಗಿಯೂ ಸ್ಥಳೀಯ ಸಂಸ್ಕೃತಿಯನ್ನು ಅವುಗಳ ಶುದ್ಧ ಭಾವರೂಪದಲ್ಲಿ ಅಭ್ಯಸಿಸುವ, ಅರ್ಥೈಸುವ ಕೆಲಸ ಮಾಡಬೇಕು. ಶ್ರದ್ಧಾಕೇಂದ್ರಗಳಲ್ಲಿ ಆಡಂಬರ, ಪ್ರದರ್ಶನಪ್ರಿಯತೆಗಿಂತ ತಿಳಿವಳಿಕೆ ಮತ್ತು ಆಚರಣೆಯಲ್ಲಿನ ನಿಷ್ಠೆಗೆ ಪ್ರೇರಣೆ ನೀಡಬೇಕು. ಕಲಾವಿದರು, ಕಲಾಸಕ್ತರು, ಆಸ್ತಿಕರಿಗೆ ಗೌರವ ಮನ್ನಣೆ ಪ್ರೋತ್ಸಾಹ ನೀಡುವುದರಿಂದ ಸಂಸ್ಕೃತಿ ಶುದ್ಧರೂಪದಲ್ಲಿರಲು ಸಹಕಾರಿಯಾಗುತ್ತದೆ. ರೂಢಿಗತ ಮೂಢನಂಬಿಕೆ ನಯವಾಗಿ ಬದಿಗೆ ಸರಿಸಿ ಕೌಟುಂಬಿಕ ನಿಷ್ಠೆ, ಜೀವನ ಮೌಲ್ಯ, ಸಮಾಜಸೇವೆ, ಪರಂಪರೆ ಮುಂತಾದವುಗಳ ವ್ಯಕ್ತಿಗತ ಆಚರಣೆಗೆ ಮಹತ್ವ ಕೊಡಬೇಕು. ಕರಾವಳಿಯಲ್ಲಿ ಕಲೆ ಸಂಸ್ಕೃತಿ ಕುರಿತ ಚಟುವಟಿಕೆಗಳು ನಡೆಯುತ್ತವೆ. ಆದರೆ ಅದರಲ್ಲಿನ ಹೂರಣ ತುಂಬಾ ಕಡಿಮೆ. ಹೊರಪ್ರದರ್ಶನ ಜಾಸ್ತಿ. ಸಾಮೂಹಿಕ ಕಾರ್ಯಭಾರದ ಸಂಸ್ಕೃತಿ ನಿಷ್ಠರ ಪಡೆ ಹುಟ್ಟುಹಾಕುವ ಕೆಲಸ ತುರ್ತು ಆಗಬೇಕಾಗಿದೆ.
* ಯು.ಚಂದ್ರಶೇಖರ ಹೊಳ್ಳ
ಉಡುಪಿ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರು
ಪಶ್ಚಿಮಘಟ್ಟ ಅಪಾಯದಲ್ಲಿದೆ
ಒಟ್ಟಾರೆ ದೃಷ್ಟಿಕೋನದಿಂದ ಪಶ್ಚಿಮಘಟ್ಟ ಅಪಾಯದಲ್ಲಿದೆ. ಬ್ರಿಟಿಷರ ಪ್ರವೇಶಾತಿಯಾದಂದಿನಿಂದ ಪಶ್ಚಿಮಘಟ್ಟದ ಒಂದೊಂದು ಮಗ್ಗಲು ಬರಿದಾಗುತ್ತಲಿದೆ. ಇನ್ನೊಂದೆಡೆ ನಗರೀಕರಣದ ಧಾವಂತ, ಕಾಡುಗಳ ಮಧ್ಯದ ದಾರಿ, ವಿದ್ಯುತ್ ಮಾರ್ಗ ರಚನೆಯಿಂದಾಗಿ ಸಸ್ಯ ವೈವಿಧ್ಯಗಳ ನಿರ್ಮೂಲನೆ ಕೆಲಸ ನಡೆದಿದೆ, ನಡೆಯುತ್ತಲೇ ಇದೆ.
ಹಿಂದಿನಂತೆ ಪಶ್ಚಿಮಘಟ್ಟದಲ್ಲಿ ಸಸ್ಯ ವೈವಿಧ್ಯತೆ ಕಾಣಲು ಈಗ ಸಾಧ್ಯವಿಲ್ಲ. ಸರಕಾರಿ ಸಂಭೂತ ಕಾಡು ಬೆಳೆಸುವಿಕೆ ಪಶ್ಚಿಮಘಟ್ಟದ ವಾಸ್ತವತೆಯ ಮೇಲೂ ಪರಿಣಾಮ ಬೀರಿದೆ. ಕಡಿದ ಕಾಡಿನ ಬದಲಾಗಿ ಏಕಪ್ರಕಾರದ ಸಸ್ಯ ಬೆಳೆಸುವಿಕೆ ನೈಜತೆಗೆ ದಕ್ಕೆ ತಂದಿದೆ. ಕೃಷಿಯ ವಿಧಾನವೂ ಸಹ ಪಶ್ಚಿಮಘಟ್ಟದ ವಾಸ್ತವತೆಗೆ ಏಟು ನೀಡಿದೆ.
ಪಶ್ಚಿಮಘಟ್ಟದ ರಕ್ಷಣೆಗೆ ಮುಖ್ಯವಾಗಿ ಮಾಡಬೇಕಾದ ಕೆಲಸವೆಂದರೆ ಸಸ್ಯ ವೈವಿಧ್ಯತೆಗಳ ರಕ್ಷಣೆ. ಜತೆಗೆ ಕೃಷಿ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಪಶ್ಚಿಮಘಟ್ಟದ ನೈಜತೆ ರಕ್ಷಿಸದಿದ್ದಲ್ಲಿ ಭೌಗೋಳಿಕ ಅಸಮತೋಲನ ನಿಶ್ಚಿತ.
*ಶಿವಾನಂದ ಕಳವೆ
ಖ್ಯಾತ ಪರಿಸರ ಹೋರಾಟಗಾರ, ಲೇಖಕ
ಸಮಗ್ರ ರಂಗಭೂಮಿಗೆ ಪುನಶ್ಚೇತನವಾಗಬೇಕು
ವಿಪರ್ಯಾಸವೆಂದರೆ ಇಂದು ಕನ್ನಡ ರಂಗಭೂಮಿ ಉತ್ತರ ಕನ್ನಡಕ್ಕೆ ಮಾತ್ರ ಸೀಮಿತಗೊಂಡಿದ್ದರೆ, ತುಳು ರಂಗಭೂಮಿ ದಕ್ಷಿಣ ಕನ್ನಡಕ್ಕೆ ಸೀಮಿತಗೊಂಡಿದ್ದು, ಸಮಗ್ರ ರಂಗಭೂಮಿಯ ಪುನಶ್ಚೇತನ ನಡೆಯುತ್ತಿಲ್ಲ. ಈ ನಿಟ್ಟಿನಲ್ಲಿ ಆಡಳಿತದ ಅಸಡ್ಡೆಯೂ ಪ್ರಮುಖ ಪಾತ್ರ ವಹಿಸುತ್ತಿದ್ದು, ಇದು ರಂಗಭೂಮಿಗೆ ಎಸಗುವ ಅಪಮಾನ.
ಕೇವಲ ಅಕಾಡೆಮಿಗಳನ್ನು ಸ್ಥಾಪಿಸಿದಲ್ಲಿಗೆ ಹೊಣೆಗಾರಿಕೆ ಮುಗಿಯುವುದಿಲ್ಲ. ಮಂಗಳೂರು ಪುರಭವನದ ಶುಲ್ಕವನ್ನು ಏರಿಕೆ ಮಾಡಿರುವುದು ಕೇವಲ ರಂಗಭೂಮಿಗೆ ಮಾತ್ರವಲ್ಲ, ಇದು ಸಾಂಸ್ಕೃತಿಕ ವಲಯಕ್ಕೆ ನುಂಗಲಾರದ ತುತ್ತಾಗಿದೆ. ಗಡಿನಾಡು ಕಾಸರಗೋಡಿನ ಸಾಂಸ್ಕೃತಿಕ ತಂಡಗಳು ನಡೆಸುವ ಪ್ರದರ್ಶನಗಳಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ನೀಡಲಿ. ದಕ್ಷಿಣ ಕನ್ನಡದ ತುಳು, ಕೊಂಕಣಿ, ಕೊಡವ ಭಾಷೆಗಳ ಪ್ರದರ್ಶನಗಳಿಗೆ (ಟಿಕೆಟ್ ಇಲ್ಲದೆ) ಪುರಭವನವನ್ನು ಅರ್ಧ ಶುಲ್ಕಕ್ಕೆ ನೀಡಲಿ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕೃತಿ ರಮಣೀಯ ತಾಣಗಳಿದ್ದು, ಸೂಕ್ತ ವಸತಿ ಸೌಲಭ್ಯ ತೊಡಕುಗಳು ಇಲ್ಲಿ ಚಿತ್ರೀಕರಣ ನಡೆಸಲು ಆಗಮಿಸುವ ಸಿನಿಮಾ ತಂಡಗಳ ಸಂಕಷ್ಟಕ್ಕೆ ಕಾರಣವಾಗುತ್ತದೆ. ದಕ್ಷಿಣ ಕನ್ನಡ ಮೂಲದ ಧಾರಾಳ ಸಂಪನ್ಮೂಲ ವ್ಯಕ್ತಿಗಳು ಇಂದು ಕನ್ನಡ ಚಿತ್ರರಂಗದ ಮೇರುಸ್ಥಾನದಲ್ಲಿದ್ದು, ಇವರು ಇಂತಹ ಸಮಸ್ಯೆಗಳ ಕುರಿತು ಗಂಭೀರ ಸಮಾಲೋಚನೆ ನಡೆಸಬೇಕು. ತುಳು, ಕೊಂಕಣಿ ಸಿನಿಮಾಗಳು ಹೆಚ್ಚು ಹೆಚ್ಚು ನಿರ್ಮಾಣಗೊಳ್ಳುವ ರೀತಿ ಈ ಬಗ್ಗೆ ಶಿಬಿರಗಳು ನಾಡಿನಲ್ಲಿ ನಡೆಯಲಿದೆ. ಪ್ರಾಮಾಣಿಕ ಯತ್ನದಿಂದ ಈ ಸಮಸ್ಯೆಗಳ ಪರಿಹಾರ ಸಾಧ್ಯ.
* ಕಾಸರಗೋಡು ಚಿನ್ನಾ

* ಹೊಸತನ ಕಲೆಗೆ ಮಾರಕವೇ?
ಯಾವುದೇ ಕಲೆಯಾಗಿರಲಿ ಮೈಮನಸ್ಸುಗಳಿಗೆ ಮುದ ನೀಡುವ ಜತೆಯಲ್ಲೇ ಬದುಕಿಗೆ ಬೆಳಕನ್ನು ನೀಡಬೇಕು. ಅಂತರಂಗದ ಕುಸುಮ ವಿಕಾಸ ಕಲೆಯ ಕಾಯಕಕ್ಕೆ ಫಲಶ್ರುತಿ! ಈ ವಿಕಾಸ ಸಂಸ್ಕಾರದಿಂದ ಪರಿಮಳಗೊಳ್ಳುತ್ತದೆ. ಈ ಪರಿಮಳ ಸುತ್ತೆಲ್ಲ ಹರಡಿ ಜೀವನಾಧಾರವಾಗುತ್ತದೆ.
ಯಕ್ಷಗಾನ ಹೇಗೆ ತನ್ನ ಜನಪ್ರಿಯತೆ ಹೆಚ್ಚಿಸುತ್ತಾ ಸಾಗಿದೆಯೋ ಅದೇ ಪ್ರಮಾಣದಲ್ಲಿ ಪರಂಪರೆಯಿಂದ ದೂರ ಸರಿದಿದೆ ಎಂಬುದು ಸತ್ಯ. ಪರಂಪರೆ ಬಗ್ಗೆ ಮಾತನಾಡುವವರು ಸಂಪ್ರದಾಯವನ್ನು ಉಳಿಸುವವರಾದರೆ ಕಲಾವಿದರು ಜನಪ್ರಿಯತೆ ಬೆನ್ನು ಹತ್ತಿ ಹೋದವರು. ವಿದ್ವಾಂಸರು ಗೋಷ್ಠಿಗಳಲ್ಲಿ ವಿಚಾರಕ್ಕಾಗಿ ವಿಷಯ ಮಂಡಿಸಿದರೆ ಕಲಾವಿದರು ಪ್ರೇಕ್ಷಕರ ಮುಂದೆ ಯಕ್ಷಗಾನವನ್ನು ಪ್ರದರ್ಶಿಸುವ ಜವಾಬ್ದಾರಿ ಹೊತ್ತಿರುತ್ತಾರೆ. ಇವರಿಗೆ ಯಕ್ಷಗಾನವೆಂಬುದು ಉದ್ಯಮ ಅಥವಾ ಕಲಾ ಉದ್ಯಮ. ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ರಂಜನೀಯವಾಗಿರುವಂತೆ ನೋಡಿಕೊಳ್ಳುವುದು ಜವಾಬ್ದಾರಿ. ಈ ಕಲೆಯ ನಿಯಂತ್ರಕ ಶಕ್ತಿ ಕಲಾವಿದರೇ ಆಗಿದ್ದು ಹೆಚ್ಚು ಪ್ರೇಕ್ಷಕರಿಗೆ ಹೆಚ್ಚು ಪ್ರಯೋಗಗಳನ್ನು ನೀಡುವವರೂ ಅವರೇ. ಕಲೆಯ ಮಾರ್ಪಾಡಿಗೆ ಅವರೇ ನೇರ ಹೊಣೆಗಾರರು. ಇದರ ಮುಂದೆ ಕಲೆಯನ್ನು ಮಾಧ್ಯಮವಾಗಿ ಸ್ವೀಕರಿಸಿದ ವಿದ್ವಾಂಸರಿಗೆ ಸಂಪ್ರದಾಯವಾದಿಗಳಿಗೆ ಈ ನಿಯಂತ್ರಣ ಶಕ್ತಿ ಇಲ್ಲವಾಗುತ್ತದೆ. ಹೀಗೆ ಕಲಾವಿದರಿಗೆ ವೃತ್ತಿಯ ಮೇಲಿನ ಪ್ರೀತಿ, ಪರಂಪರೆ, ಸಂಪ್ರಾಯವಾದಿಗಳಿಗೆ ಕೇವಲ ಕಲೆಯ ಮೇಲಿನ ಪ್ರೀತಿ ಈ ಎರಡು ಜಂಜಾಟದಲ್ಲಿ ಮೊದಲಿನವರು ಜಯಶೀಲರಾಗಿ ಕಲೆಯ ಮಾರ್ಪಾಡಾಯಿತು.
* ಎಸ್.ವಿ.ಉದಯ ಕುಮಾರ್ ಶೆಟ್ಟಿ ಮಣಿಪಾಲ
ಪ್ರಾಧ್ಯಾಪಕರು, ಎಂ.ಐ.ಟಿ. ಮಣಿಪಾಲ

ಹೊಸ ದೃಷ್ಟಿಕೋನ ಅಧ್ಯಯನ ಆಗಬೇಕಿದೆ
ಪರಂಪರೆಯಿಂದ ಯಕ್ಷಗಾನಕ್ಕೆ ಪೌರಾಣಿಕ ಮೌಲ್ಯ ಇರುವ ಕತೆಗಳೇ ಬಂದಿವೆ. ಯಕ್ಷಗಾನ ನೋಡುವುದು ಕತೆಯ ಹೊಸತನಕ್ಕೂ ಅಲ್ಲ, ಕತೆಗೆ ಸಂಬಂಧಪಟ್ಟ ರುಚಿಗಾಗಿಯೂ ಅಲ್ಲ. ಪಾತ್ರ ಚಿತ್ರಣ, ಕುಣಿತ ಮುಂತಾದ ಕಲಾತ್ಮಕ ಅಂಶಗಳನ್ನು ಗಮನಿಸಲು ಹೋಗುತ್ತಿದ್ದರು. ಈಗ ಬರುತ್ತಿರುವ ಹೊಸಕತೆಗಳಿಂದಾಗಿ ನೋಡಬೇಕಾದ ದೃಷ್ಟಿಯೇ ಬದಲಾಗುತ್ತದೆ. ಸಿನಿಮಾ ಕತೆಗಳನ್ನು ಯಕ್ಷಗಾನಕ್ಕೆ ಅಳವಡಿಸುವಾಗ ಯಕ್ಷಗಾನದ ಮೂಲಭೂತ ಅಭಿರುಚಿ ಬದಲಾಗುವ ಸಂಭವ ಇದೆ. ಈ ವಾಸ್ತವ ನೆಲೆಯಲ್ಲಿ ಸಿನಿಮಾ ಕತೆ ಯಕ್ಷಗಾನ ಸ್ವಭಾವಕ್ಕೆ ಹೊಂದಿಕೊಳ್ಳುವುದಿಲ್ಲ.
ಯಕ್ಷಗಾನಗಾನದಲ್ಲಿ ಹೊಸತನ ತರಲೇ ಬೇಕಾಗುತ್ತದೆ. ಯಕ್ಷಗಾನದ ಮೂಲಭೂತವಾದ ಕಲಾತ್ಮಕ ಚೌಕಟ್ಟಿನ ಒಳಗೆ ಮತ್ತು ಪೌರಾಣಿಕ ಕತೆಗಳಿಗೆ ಹೊಸತನದ ಅಗತ್ಯವಿದೆ. ಸಮಕಾಲೀನ ಬದುಕಿನೊಂದಿಗೆ ಅದರ ಪ್ರಸ್ತುತತೆ ಇರಬೇಕು. ಹೊಸ ವಿಚಾರ, ಹೊಸ ದೃಷ್ಟಿಕೋನಗಳ ಅಧ್ಯಯನ ಮಾಡಬೇಕು. ಪೌರಾಣಿಕ ಪ್ರಸಂಗಗಳನ್ನೇ ಹೊಸ ಸಂವಿಧಾನಕ್ಕೆ (ರೀ ಅರೆಂಜ್) ಅಳವಡಿಸಬೇಕು. ಯಕ್ಷಗಾನ ತಿಳಿದಿರುವ ನಾಟಕ ನಿರ್ದೇಶಕರಲ್ಲಿ ಅವರಿಂದ ಯಕ್ಷಗಾನ ಪ್ರಸಂಗ ನಿರ್ದೇಶಿಸುವ ಪ್ರಯತ್ನ ಮಾಡಿ, ಪರಿಣಾಮ ಹೇಗಿದೆ ಎಂದು ನೋಡಬಹುದು.
* ಎಂ.ಎಲ್.ಸಾಮಗ
ಖ್ಯಾತ ಯಕ್ಷಗಾನ ಕಲಾವಿದರು

ಸಬ್ಸಿಡಿ ಹಣ ಹೆಚ್ಚಿಸಬೇಕು
* ಇತರ ಕ್ಷೇತ್ರಗಳಲ್ಲಿ ಸಾಸಿರುವ ಯಶಸ್ಸಿಗೆ ಹೋಲಿಸಿದರೆ, ತುಳು ಸಿನಿಮಾ ರಂಗದ ಅಭಿವೃದ್ಧಿಯಲ್ಲಿ ನಾವು ಹಿಂದೆ ಉಳಿದಿದ್ದೇವೆ. ಒಳ್ಳೆಯ ತುಳು ಸಿನಿಮಾ ನೀಡಿದರೆ ಪ್ರೇಕ್ಷಕರು ಸ್ವೀಕರಿಸಬಹುದು. ಆದರೆ ಅಂತಹ ಸಿನಿಮಾ ನೀಡಲು ಒಂದಷ್ಟು ಕೊರತೆಗಳಿವೆ. ತುಳು ನಾಟಕ ರಂಗ ಸದ್ಯ ಸಮೃದ್ಧವಾಗಿದೆ. ಆದರೆ ತುಳು ಸಿನಿಮಾ ರಂಗಕ್ಕೆ ಸರಕಾರದ ಸಹಾಯ ಬೇಕಾಗಿದೆ.ಈಗ ನೀಡುತ್ತಿರುವ ಸಬ್ಸಿಡಿ ಹಣವನ್ನು ಇನ್ನಷ್ಟು ಹೆಚ್ಚಿಸುವುದು ನಮ್ಮ ಬೇಡಿಕೆ. ಸಬ್ಸಿಡಿ ದೊರೆಯುತ್ತದೆ ಎನ್ನುವ ಕಾರಣಕ್ಕಾಗಿ `ನಾಮ್ ಕೆ ವಾಸ್ತೆ' ತುಳು ಸಿನಿಮಾ ನಿರ್ಮಿಸಬಾರದು. ವ್ಯಾಪಾರ ಉದ್ದೇಶ ಬಿಟ್ಟು ಗುಣಮಟ್ಟದ ಸಿನಿಮಾ ನೀಡುವ ಹೊಣೆಗಾರಿಕೆ ಇರಬೇಕು. ಈಗ ಪ್ರತಿ ವರ್ಷ ತಲಾ ಒಂದು ತುಳು, ಕೊಂಕಣಿ, ಕೊಡವ ಭಾಷೆಯ ಚಿತ್ರಗಳಿಗೆ ಸರಕಾರ ಸಬ್ಸಿಡಿ ನೀಡುತ್ತಿದೆ. ಒಂದೊಮ್ಮೆ ಕೊಡವ, ಕೊಂಕಣಿ ಭಾಷೆಯ ಸಿನಿಮಾ ಒಂದು ವರ್ಷ ಸಾಲಿನಲ್ಲಿ ನಿರ್ಮಾಣವಾಗದಿದ್ದರೆ, ಆ ಹಣವನ್ನು ತುಳು ಸಿನಿಮಾಗಳಿಗೆ ನೀಡುವಂತೆ ಸರಕಾರವನ್ನು ವಿನಂತಿಸಿದ್ದೇವೆ.
* ತುಳು ರಂಗಭೂಮಿಗೆ ಪ್ರೇಕ್ಷಕರ ಕೊರತೆ ಇಲ್ಲ. ಆದರೆ ರಂಗ ಮಂದಿರದ ಕೊರತೆ ಇದೆ. ಮಂಗಳೂರು ನಗರವೂ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ರಂಗ ಮಂದಿರ ನಿರ್ಮಾಣವಾದರೆ ಪ್ರತಿ ದಿನ ತುಳು ನಾಟಕದ ಪ್ರದರ್ಶನ ನಡೆಯಬಹುದು.
ವಿಜಯಕುಮಾರ್ ಕೊಡಿಯಾಲ್‌ಬೈಲ್
ನಾಟಕಕಾರ, ನಿರ್ದೇಶಕ
ಸಾಮಾನ್ಯ ಜನತೆ ಕೂಡಾ ಅಭಿವೃದ್ದಿ ಬಗ್ಗೆ ಚಿಂತನೆ ಮಾಡಲು `ವಿಜಯ ಕರ್ನಾಟಕ'ದ `ಮುಂದೆ ಹೋಗೋಣ ಮಂಗಳೂರು' ವೇದಿಕೆ ಒದಗಿಸಿದೆ. ನಾಡಿನ ಪ್ರಗತಿ ಹೇಗಿರಬೇಕು..? ಸಾಧನೆಯ ಹಾದಿಯಲ್ಲಿ ಆಡಳಿತ ವ್ಯವಸ್ಥೆ ಎಲ್ಲಿ ಎಡವಿದೆ..? ಸಮಸ್ಯೆಗಳಿಗೆ ಪರಿಹಾರ ಏನು..ಹೀಗೆ ಎಲ್ಲ ವಿವರ/ವಿಷಯಗಳನ್ನು ಸರಳವಾಗಿ ಓದುಗರಿಗೆ ನೀಡುವುದರ ಜತೆಗೆ, ಅಹವಾಲುಗಳನ್ನು ಸರಕಾರಕ್ಕೆ ಸಲ್ಲಿಸುವ ಕಾರ್ಯ ಸ್ತುತ್ಯಾರ್ಹ . ಪತ್ರಿಕೆಯೊಂದು ಜನಧ್ವನಿಯಾಗುವ ಮೂಲಕ ಜನತೆಯ ಅರ್ಹ ಹೋರಾಟಗಳಿಗೆ ಹೊಸ ಶಕ್ತಿ ತುಂಬಿದೆ. ತನ್ಮೂಲಕ ಸಮಸ್ತ ಕನ್ನಡಿಗರ ಹೆಮ್ಮೆ ಎಂಬ `ವಿಜಯ ಕರ್ನಾಟಕ'ದ ಧ್ಯೇಯ ವಾಕ್ಯ ಅರ್ಥಪೂರ್ಣವಾಗಿ ಸಾಕಾರಗೊಳ್ಳುತ್ತಿದೆ.
ಅಭಿವೃದ್ದಿ ಕಾರ್ಯ ಸರಕಾರದ, ಜನಪ್ರತಿನಿಗಳ ಹೊಣೆಗಾರಿಕೆ ಹೌದು. ಹಾಗೆಂದು ನಾಗರಿಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಈ ಹಿನ್ನೆಲೆಯಲ್ಲಿ `ವಿಜಯ ಕರ್ನಾಟಕ' ಎಲ್ಲರನ್ನು ಎಚ್ಚರಿಸುವ ಕಾರ್ಯ ಮಾಡಿದೆ. ನಮ್ಮೂರಿನ ಪ್ರಗತಿಯನ್ನು ನಾವೇ ನಿರ್ಧರಿಸಲು ಇದು ಸಕಾಲ.
ಇತರ ಪ್ರದೇಶಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆ ಅಭಿವೃದ್ದಿ ಕಾರ್ಯಗಳಲ್ಲಿ ಒಂದಷ್ಟು ಮುಂದಿದೆ. ಆದರೆ ಇಲ್ಲಿನ ರಸ್ತೆಗಳು ಪ್ರಗತಿಗೆ ಅಡ್ಡಿಯಾಗಿರುವುದು ಹಗಲಿನಷ್ಟೇ ಸತ್ಯ. ಕೈಗಾರಿಕೆ, ಪ್ರವಾಸೋದ್ಯಮ..ಹೀಗೆ ಬಹುತೇಕ ಕ್ಷೇತ್ರಗಳ ಪ್ರಗತಿ ಕುಂಠಿತವಾಗಿದ್ದರೆ ಅದಕ್ಕೆ ಕಳಪೆ ರಸ್ತೆಗಳು ಪರೋಕ್ಷ ಕಾರಣ. ಜಿಲ್ಲೆಯ ರಸ್ತೆಗಳಿಗೆ ಆಂದೋಲನದ ರೀತಿಯಲ್ಲಿ ಕಾಯಕಲ್ಪವಾಗಬೇಕು. ಇಲ್ಲವಾದರೆ ಮುಂದೆ ಹೋಗೋಣ.. ಕನಸಾಗಿಯೇ ಉಳಿಯಬಹುದು.
. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಲೋಕೋಪಯೋಗಿ, ಜಿಪಂ..ಹೀಗೆ ಜಿಲ್ಲೆಯ ಎಲ್ಲ ರಸ್ತೆಗಳ ನಿರ್ವಹಣೆಗೆ ಎಷ್ಟು ಹಣ ವ್ಯಯವಾಗುತ್ತಿದೆ..? ರಸ್ತೆಗಳ ಅಭಿವೃದ್ದಿ ಯಾಕೆ ಸಾಧ್ಯವಾಗುತ್ತಿಲ್ಲ..? ಜಿಲ್ಲೆಯ ಎಲ್ಲ ರಸ್ತೆಗಳ ಸ್ಥಿತಿ-ಗತಿ ಬಗ್ಗೆ ಒಂದು ಸಮಗ್ರ ಅವಲೋಕನ ಪತ್ರಿಕೆ ಮೂಲಕ ನಡೆಯಬೇಕೆಂದು ನನ್ನ ವಿನಂತಿ.
-ಕೆ.ಎಸ್.ದೇವರಾಜ್
ನಿರ್ದೇಶಕರು , ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್
ಅಭಿವೃದ್ಧಿ ಮಂತ್ರ ಹೇಳಲು ಶುದ್ಧ ಹಸ್ತ ಅಕಾರಿಗಳು ಬೇಕು
ಮಂಗಳೂರು ಅಭಿವೃದ್ಧಿ ವಿಶೇಷ ವಿತ್ತವಲಯ, ಐಟಿ, ಬಿಟಿಯಿಂದ ಮಾತ್ರ ಸಾಧ್ಯ ಎನ್ನವುದು ಸುಳ್ಳು. ಮೊದಲು ಮೂಲಭೂತ ಸೌಕರ್‍ಯ ಅಭಿವೃದ್ಧಿಯಾಗಬೇಕು ಮತ್ತು ನಗರದ ಸಮಸ್ಯೆಗಳನ್ನು ಬಗೆಹರಿಯಬೇಕು.
ಮಹಾನಗರ ಪಾಲಿಕೆ ಯಾಗಿ ರೂಪುಗೊಂಡು ೨೫ ವರ್ಷ ಸಂದಿದೆ. ಆದರೆ ನಗರದಲ್ಲಿ ಶೇ.೭೫ ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ! ಮಳೆಗಾಲದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ರಸ್ತೆಗಳ ಸಮಸ್ಯೆ ಹೇಳುವುದೇ ಬೇಡ.
ನಗರಾಭಿವೃದ್ಧಿ ಪ್ರಾಕಾರ ಇದ್ದರೂ ಕೂಡಾ ನಗರದಲ್ಲಿ ಕಾನೂನು ಉಲ್ಲಂಘಿಸಿ ಎರ್ರಾಬಿರ್ರಿಯಾಗಿ ಕಟ್ಟಡಗಳು ನಿರ್ಮಾಣವಾಗಿದೆ. ಮೊದಲು ಇದರತ್ತ ಗಮನಿಸಬೇಕು. ಅನೇಕ ಅಭಿವೃದ್ಧಿ ಪ್ರಾಕಾರಗಳು ಮಂಗಳೂರಿನಲ್ಲಿ ಇವೆ. ಬೇಸರದ ವಿಷಯವೆಂದರೆ ಇವುಗಳಿಂದ ಮಂಗಳೂರು ಅಭಿವೃದ್ಧಿ ಮಾತ್ರ ಆಗಿಲ್ಲ.
ಸರಕಾರ ಕೋಟಿಗಟ್ಟಲೆ ಅನುದಾನ ಬಿಡುಗಡೆಯ ಹೇಳಿಕೆ ನೀಡುತ್ತಿದೆ. ಇದರಿಂದ ಅಭಿವೃದ್ಧಿಯಾಗದು. ಮುಖ್ಯವಾಗಿ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಅಕಾರಿಗಳು ಶುದ್ಧ ಹಸ್ತರಾಗಿರಬೇಕು. ಭ್ರಷ್ಟಾಚಾರದಲ್ಲಿ ಮಂಗಳೂರು ಕರ್ನಾಟಕದಲ್ಲಿಯೇ ನಂ.೧ ನಿವೃತ್ತ ಲೋಕಾಯುಕ್ತ ನ್ಯಾ.ವೆಂಕಟಾಚಲ ಹೇಳಿದ್ದರು.
ಇದಕ್ಕೆ ಪೂರಕವಾಗಿ ಮಂಗಳೂರಿನಲ್ಲಿ ಅಮಾನತಾಗಿರುವ ಅಕಾರಿಗಳು ಮತ್ತೆ ಸೇರ್ಪಡೆಗೊಳ್ಳುತ್ತಿದ್ದಾರೆ. ಹಲವು ವರ್ಷಗಳಿಂದ ಬೀಡುಬಿಟ್ಟಿರುವ ಅಕಾರಿಗಳನ್ನು ಮೊದಲು ಬದಲಾವಣೆ ಮಾಡಬೇಕು. ಯೋಜನೆ ಫಲಪ್ರದವಾಗದಿದ್ದಲ್ಲಿ ಅಕಾರಿಗಳನ್ನು ಹೊಣೆಗಾರರನ್ನಾಗಿಸಬೇಕು ಆಗ ಮಾತ್ರ ಅಭಿವೃದ್ಧಿ ಸಾಧ್ಯ.
ವಿಜಯ ಕರ್ನಾಟಕ ಕೇವಲ ಪತ್ರಿಕೆಯಾಗಿ ಮಾತ್ರವಲ್ಲದೆ ಶಕ್ತಿಯಾಗಿ ಕೆಲಸ ಮಾಡುತ್ತಿದೆ. ಮಂಗಳೂರು ಅಭಿವೃದ್ಧಿಗೆ ಹೊಸ ಅಭಿಯಾನದ ಮೂಲಕ ತನ್ನ ಕಾಣಿಕೆ ನೀಡುತ್ತಿದೆ, ಇದನ್ನು ಮುಂದುವರಿಸಿಕೊಂಡು ಹೋಗಿ ಮಾದರಿ ಪತ್ರಿಕೆಯಾಗಲಿ.

ಜಿ. ಹನುಮಂತ ಕಾಮತ್
ನಾಗರಿಕ ಹಿತರಕ್ಷಣೆ ಸಮಿತಿ ಅಧ್ಯಕ್ಷ
ಫೋಟೊ ಇದೆ ೨೪ಎಂ-ಹನುಮಂತ