* ಸಾಂಸ್ಕೃತಿಕ ರಂಗದ ಪ್ರಗತಿಯೂ ನಾಡಿನ ಅಭ್ಯುದಯಕ್ಕೆ ನಾಂದಿ. ಈ ಹಿನ್ನೆಲೆಯಲ್ಲಿ `ವಿಜಯ ಕರ್ನಾಟಕ'ದ `ಮುಂದೆ ಹೋಗೋಣ ಮಂಗಳೂರು' ಅಭಿಯಾನದಲ್ಲಿ ಎಲ್ಲ ರಂಗದ ಅಭಿವೃದ್ಧಿಯ ಜತೆಗೆ ಜಿಲ್ಲೆಯ ಸಾಂಸ್ಕೃತಿಕ ರಂಗದ ಪ್ರಗತಿ ಬಗ್ಗೆ ಚಿಂತನೆ ನಡೆಸಿದ್ದು ಮೆಚ್ಚುಗೆಯಾಯಿತು.
* ಇತರ ಕ್ಷೇತ್ರಗಳಲ್ಲಿ ಸಾಸಿರುವ ಯಶಸ್ಸಿಗೆ ಹೋಲಿಸಿದರೆ, ತುಳು ಸಿನಿಮಾ ರಂಗದ ಅಭಿವೃದ್ಧಿಯಲ್ಲಿ ನಾವು ಹಿಂದೆ ಉಳಿದಿದ್ದೇವೆ. ಒಳ್ಳೆಯ ತುಳು ಸಿನಿಮಾ ನೀಡಿದರೆ ಪ್ರೇಕ್ಷಕರು ಸ್ವೀಕರಿಸಬಹುದು. ಆದರೆ ಅಂತಹ ಸಿನಿಮಾ ನೀಡಲು ಒಂದಷ್ಟು ಕೊರತೆಗಳಿವೆ. ತುಳು ನಾಟಕ ರಂಗ ಸದ್ಯ ಸಮೃದ್ಧವಾಗಿದೆ. ಆದರೆ ತುಳು ಸಿನಿಮಾ ರಂಗಕ್ಕೆ ಸರಕಾರದ ಸಹಾಯ ಬೇಕಾಗಿದೆ.ಈಗ ನೀಡುತ್ತಿರುವ ಸಬ್ಸಿಡಿ ಹಣವನ್ನು ಇನ್ನಷ್ಟು ಹೆಚ್ಚಿಸುವುದು ನಮ್ಮ ಬೇಡಿಕೆಯಾಗಿದೆ. ಸಬ್ಸಿಡಿ ದೊರೆಯುತ್ತದೆ ಎನ್ನುವ ಕಾರಣಕ್ಕಾಗಿ `ನಾಮ್ ಕೆ ವಾಸ್ತೆ' ತುಳು ಸಿನಿಮಾ ನಿರ್ಮಿಸಬಾರದು. ವ್ಯಾಪಾರ ಉದ್ದೇಶ ಬಿಟ್ಟು ಗುಣಮಟ್ಟದ ಸಿನಿಮಾ ನೀಡುವ ಹೊಣೆಗಾರಿಕೆ ಇರಬೇಕು. ಈಗ ಪ್ರತಿ ವರ್ಷ ತಲಾ ಒಂದು ತುಳು, ಕೊಂಕಣಿ, ಕೊಡವ ಭಾಷೆಯ ಚಿತ್ರಗಳಿಗೆ ಸರಕಾರ ಸಬ್ಸಿಡಿ ನೀಡುತ್ತಿದೆ. ಒಂದೊಮ್ಮೆ ಕೊಡವ, ಕೊಂಕಣಿ ಭಾಷೆಯ ಸಿನಿಮಾ ಒಂದು ವರ್ಷ ಸಾಲಿನಲ್ಲಿ ನಿರ್ಮಾಣವಾಗದಿದ್ದರೆ, ಆ ಹಣವನ್ನು ತುಳು ಸಿನಿಮಾಗಳಿಗೆ ನೀಡುವಂತೆ ಸರಕಾರವನ್ನು ವಿನಂತಿಸಿದ್ದೇವೆ.
* ತುಳು ರಂಗಭೂಮಿಗೆ ಪ್ರೇಕ್ಷಕರ ಕೊರತೆ ಇಲ್ಲ. ನಾಟಕ ತಂಡಗಳ ಸಂಖ್ಯೆ ಹೆಚ್ಚುತ್ತಿರುವುದೇ ಇದಕ್ಕೆ ನಿದರ್ಶನ. ಆದರೆ ರಂಗಮಂದಿರದ ಕೊರತೆ ಎಲ್ಲ ನಾಟಕ ತಂಡಗಳನ್ನು ಬಾಸುತ್ತಿದೆ. ಇರುವ ಒಂದು ಪುರಭವನವನ್ನೇ ಅವಲಂಭಿಸಬೇಕಾದ ಅನಿವಾರ್ಯತೆ. ರಂಗ ಮಂದಿರದ ಕೊರತೆ ನಿವಾರಣೆಯಾಗಬೇಕು. ಮಂಗಳೂರು ನಗರವೂ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ರಂಗ ಮಂದಿರ ನಿರ್ಮಾಣವಾದರೆ ಪ್ರತಿ ದಿನ ತುಳು ನಾಟಕದ ಪ್ರದರ್ಶನ ನಡೆಯಬಹುದು.
-ನಾಟಕಕಾರ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ಬೈಲ್.
** ವಿಜಯಕುಮಾರ್ ಕೊಡಿಯಾಲ್ಬೈಲ್
ಶನಿವಾರ, ಅಕ್ಟೋಬರ್ 25, 2008
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ