ಎಲ್ಲ ದಿಕ್ಕಿನಲ್ಲೂ ಶರ ವೇಗದಲ್ಲಿ ಬೆಳೆಯುತ್ತಿರುವ ಮಂಗಳೂರಿಗೆ ಒಂದು ಆರ್ಟ್ ಗ್ಯಾಲರಿ ಬೇಕು. ಕಳೆದ ೨೦ ವರ್ಷಗಳಿಂದ ಇಲ್ಲಿನ ಕಲಾವಿದರು ಇಂಥದ್ದೊಂದು ವೇದಿಕೆಗಾಘಿ ಕಾಯುತ್ತಿದ್ದು, ಇನ್ನೂ ಕನಸು ನನಸಾಗಿಲ್ಲ.
ಪ್ರತೀ ವರ್ಷವೂ ಜಿಲ್ಲಾಡಳಿತ ಹಾಗೂ ಮಂತ್ರಿಗಳು ಆರ್ಟ್ ಗ್ಯಾಲರಿಯ ಬಗ್ಗೆ ಆಶ್ವಾಸನೆ ಕೊಡುತ್ತಲೇ ಇದ್ದಾರೆ. ಇನ್ನೇನು ಮುಂದಿನ ತಿಂಗಳು ಆರ್ಟ್ ಗ್ಯಾಲರಿ ಉದ್ಘಾಟನೆಯಾಗುತ್ತದೆ ಎಂಬ ಆಶ್ವಾಸನೆ ಕೂಡ ಒಂದೆರಡು ಬಾರಿ ಸಿಕ್ಕಿದೆ. ಆದರೆ ನಿಜದಲ್ಲಿ ಕನಸು ಕನಸಾಗಿಯೇ ಇದೆ.
ಕದ್ರಿಯಲ್ಲಿನ ಜಿಂಕೆ ಉದ್ಯಾನದ ಸಮೀಪ ಜಿಲ್ಲಾ ರಂಗಮಂದಿರದಲ್ಲಿ ಆರ್ಟ್ ಗ್ಯಾಲರಿಗೆ ಜಾಗ ಕೊಡುವುದಾಗಿ ಹೇಳಲಾಗಿತ್ತು. ಆದರೆ ಕೊನೆಗೆ ಜಿಲ್ಲಾ ರಂಗಮಂದಿರದ ವಿಷಯವೇ ನೆನೆಗುದಿಗೆ ಬಿದ್ದಿರುವುದರಿಂದ ಇದೀಗ ಆರ್ಟ್ ಗ್ಯಾಲರಿಯ ಬಗ್ಗೆ ಕೇಳುವವರೇ ಇಲ್ಲವಾಗಿದ್ದಾರೆ.
ವಿಜಯ ಕರ್ನಾಟಕದ `ಮುಂದೆ ಹೋಗೋಣ ಮಂಗಳೂರು' ಆಶಯದಲ್ಲಿ ಇದನ್ನೂ ಸೇರಿಸಿ ಸರಕಾರವನ್ನು ಎಚ್ಚರಿಸಬೇಕು.
ಗಣೇಶ್ ಸೋಮಯಾಜಿ,
ಕಾರ್ಯದರ್ಶಿ, ಆರ್ಟಿಸ್ಟ್ ಕಂಬಾಯಿನ್, ಮಂಗಳೂರು.
ಶುಕ್ರವಾರ, ಅಕ್ಟೋಬರ್ 24, 2008
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ