ತುಂಬೆ ಬಳಿ ನೇತ್ರಾವತಿ ನದಿಗೆ ೪೦ ಕೋಟಿ ರೂ. ವೆಚ್ಚದ ಹೊಸ ವೆಂಟೆಡ್ ಡ್ಯಾಂಗೆ ಅಣೆಕಟ್ಟು ನಿರ್ಮಿಸುವ ಕಾಮಗಾರಿ ಶೀಘ್ರ ಆರಂಭಿಸಲಾಗುವುದು.
ಹೊಸ ಪ್ರಯೋಗಗಳನ್ನು ಮಾಡಿ ನಾಡಿನ ಜನತೆಯ ಮನೆ ಮಾತಾಗಿರುವ ವಿಜಯ ಕರ್ನಾಟಕ ಪತ್ರಿಕೆಯು ಕರಾವಳಿ ಜನಜೀವನದ ಅವಿಭಾಜ್ಯ ಅಂಗವಾಗಿ ಬೆಳೆಯುತ್ತಿದೆ. ಇದೀಗ ಕರಾವಳಿಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ÊÜááí¨æ ÖæãàWæãà ÊÜáíWÜÙÜãÃÜáಯೋಜನೆ ರೂಪಿಸಿರುವುದು ಅದರ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ.
ಮಂಗಳೂರಿನ ಅಭಿವೃದ್ಧಿಗೆ ಮುಖ್ಯವಾಗಿ ಆಗಬೇಕಿರುವುದೇ ಮೂಲ ಸೌಲಭ್ಯ ಹೆಚ್ಚಳ. ಬೆಂಗಳೂರಿನಂತೆ ಮಂಗಳೂರನ್ನು ಅಭಿವೃದ್ಧಿಪಡಿಸಲು ಮೊದಲು ವಿಶಾಲ ರಸ್ತೆಗಳ ಅಗತ್ಯವಿದೆ. ಆದರೆ ಹಳೆಯ ರಸ್ತೆಗಳು ಅಭಿವೃದ್ಧಿ ಗೆ ಹಲವಾರು ಅಡಚಣೆಗಳಿವೆ. ಇನ್ನಾದರೂ ನಾವೆಲ್ಲಾ ಸೇರಿ, ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳು, ಗ್ರಾಮೀಣ ರಸ್ತೆಗಳ ಅಭಿವೃದ್ಧಿ ನಡೆಸಬೇಕಾಗಿದೆ.
ಕರಾವಳಿ ಪ್ರದೇಶದಲ್ಲಿ ವರ್ಷಕ್ಕೆ ೪೦೦ ಸೆಂ.ಮೀ.ನಷ್ಟು ಮಳೆಯಾದರೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಬರವಿರುತ್ತದೆ. ಆದ್ದರಿಂದ ಮುಂದಿನ ೫೦ ವರ್ಷಗಳ ದೃಷ್ಟಿಯಿಂದ ಮಂಗಳೂರಿಗೆ ಹಾಗೂ ಜಿಲ್ಲೆಗೆ ಕುಡಿಯುವ ನೀರಿನ ಯೋಜನೆ ರೂಪಿಸಬೇಕಾಗಿದೆ. ಮರೋಳಿ ಗ್ರಾಮದ ಪಂಪ್ವೆಲ್ ಬಳಿ ವಿಸ್ತಾರವಾದ ಸರ್ವಿಸ್ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಬಿಜೈ ಮಾರುಕಟ್ಟೆ, ದೇರೆಬೈಲು ಮಾರುಕಟ್ಟೆ, ಉರ್ವ ಮಾರುಕಟ್ಟೆ, ಸುರತ್ಕಲ್ ಮಾರುಕಟ್ಟೆ, ಕೇಂದ್ರ ಮಾರುಕಟ್ಟೆಯನ್ನು ಆಧುನಿಕ ಶೈಲಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಹಂಪನಕಟ್ಟೆ ಹಳೆ ಬಸ್ ನಿಲ್ದಾಣದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ಮತ್ತು ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತಿದೆ.
ಮಂಗಳೂರು ನಗರಾಭಿವೃದ್ಧಿ ಪ್ರಾಕಾರದಿಂದ ಪದವು ಗ್ರಾಮದಲ್ಲಿ ೯.೮೧ ಎಕರೆ ಜಮೀನಿನಲ್ಲಿ ೧೨೭ ಮನೆ ನಿವೇಶನ ಹಾಗೂ ಮದ್ಯ ಮತ್ತು ಚೇಳಾರು ಗ್ರಾಮದಲ್ಲಿ ೬೫೦ ಎಕರೆ ಪೈಕಿ ೨೦೦ ಎಕರೆಯಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿತರಿಸಲಾಗುವುದು. ದೇರೆಬೈಲ್ ಗ್ರಾಮದ ಮುಡಾ ಕಚೇರಿ ಬಳಿ ಮೂರು ಕೋಟಿ ರೂ. ವೆಚ್ಚದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಿಸಲಾಗುವುದು.
ಕೃಷ್ಣ ಜೆ.ಪಾಲೆಮಾರ್,
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು.
.............................
ಮಂಗಳಾ ಕಾರ್ನಿಶ್ ರಸ್ತೆ ಶೀಘ್ರ ಅನುಷ್ಠಾನ ಅಗತ್ಯ
ಮಂಗಳೂರಿನ ಅಭಿವೃದ್ಧಿ ದೃಷ್ಟಿಯಲ್ಲಿ ÊÜááí¨æ ÖæãàWæãà ÊÜáíWÜÙÜãÃÜá ಪ್ರಯತ್ನ ಶ್ಲಾಘನೀಯ. ನಾನು ಈ ಮೊದಲೇ ಹೇಳಿದಂತೆ ನಗರದ ಅಭಿವೃದ್ಧಿಗೆ ಮೊದಲು ಇಲ್ಲಿಯ ವಾಹನ, ಜನ ನಿಬಿಡತೆ ಕಡಿಮೆ ಮಾಡಲೇಬೇಕು. ಎಲ್ಲ ಅಭಿವೃದ್ಧಿಯೂ ವ್ಯವಸ್ಥಿತವಾಗಿಯೇ ನಡೆಯಬೇಕು. ನಗರವನ್ನು ಹೊರ ವಲಯಕ್ಕೆ ವಿಸ್ತರಿಸಿದರೆ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ.
ಟ್ರಾಫಿಕ್ ಜಾಮ್ ಎಂಬುದು ಮಂಗಳೂರಿನ ಸದ್ಯದ ದೊಡ್ಡ ಸಮಸ್ಯೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಮಂಗಳಾ ಕಾರ್ನಿಶ್ ರಸ್ತೆ ಯೋಜನೆ ಶೀಘ್ರ ಅನುಷ್ಠಾನಕ್ಕೆ ತರಬೇಕು. ಯಾವ ಕಾರಣಕ್ಕೂ ವಿಳಂಬವಾಗಬಾರದು. ಇದರ ಜತೆಗೆ ರಾಜ್ಯ ಸರಕಾರ ಪ್ರಸ್ತಾಪಿಸಿರುವ ಮೋನೊ ರೈಲು ಸಂಚಾರ ಆರಂಭಗೊಂಡರೆ, ಈಗಿನ ಬಸ್ಸುಗಳ ಜನ ಜಂಗುಳಿ ಕೂಡ ಕಡಿಮೆಯಾಗಬಹುದು. ಜನರು ಶೀಘ್ರ ಹಾಗೂ ನೆಮ್ಮದಿಯಾಗಿ ಪ್ರಯಾಣ ಬೆಳೆಸಬಹುದು.
ಮತ್ತೊಮ್ಮೆ ಹೇಳುತ್ತೇನೆ, ಮಂಗಳೂರು ನಗರ ಬೆಳೆದರಷ್ಟೇ ಸಾಲದು, ವ್ಯವಸ್ಥಿತವಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಸಹಕಾರದಿಂದ ರಸ್ತೆ, ಕುಡಿಯುವ ನೀರು, ಒಳಚರಂಡಿ, ಕಸ ವಿಲೇವಾರಿ, ನಗರದ ಸುಂದರೀಕರಣಕ್ಕೆ ಆದ್ಯತೆ ನೀಡುತ್ತಿದ್ದೇವೆ. ನಗರದ ಸರ್ವತೋಮುಖ ಅಭಿವೃದ್ಧಿ ನಿಟ್ಟಿನಲ್ಲಿ ಬಿ-೨ ನಗರವಾಗಿ ಅಭಿವೃದ್ಧಿಪಡಿಸಲು ಸರಕಾರಕ್ಕೆ ಮನವಿ ಮಾಡಿದ್ದೇವೆ.
ಗಣೇಶ ಹೊಸಬೆಟ್ಟು, ಮೇಯರ್, ಮಂಗಳೂರು
..........................
ಕಾರಿಡಾರ್ ಯೋಜನೆ ಕಲ್ಪನೆ ಅದ್ಭುತ
ವಿಜಯ ಕರ್ನಾಟಕದ ÊÜááí¨æ ÖæãàWæãà ÊÜáíWÜÙÜãÃÜá ಯೋಜನೆ ಗಮನಿಸಿದೆ. ಜಿಲ್ಲೆಯ ಸಮಗ್ರ ಮಾಹಿತಿ ಕೊಟ್ಟಿದ್ದೀರಿ. ಜತೆಗೆ ಮಂಗಳೂರಿನ ಅಭಿವೃದ್ಧಿ ಹೇಗೆ ಮಾಡಬಹುದು ಎಂಬ ಸಲಹೆ ನೀಡಿದ್ದೀರಿ. ಮಂಗಳೂರನ್ನು ಉತ್ತುಂಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪತ್ರಿಕೆ ವಹಿಸಿರುವ ಜವಾಬ್ದಾರಿ, ಬದ್ಧತೆ ಅಭಿನಂದನೀಯ.
ಮಂಗಳೂರು- ಮಣಿಪಾಲ ಕಾರಿಡಾರ್ ಯೋಜನೆ ಕಲ್ಪನೆ ಅದ್ಭುತ. ಇದು ಅನುಷ್ಠಾನಕ್ಕೆ ಬಂದರೆ ಎರಡು ಪ್ರಮುಖ ಕೇಂದ್ರಗಳ ನಡುವಿನ ದೂರ ಕಡಿಮೆಯಾಗಲಿದೆ. ಈಗ ಮಂಗಳೂರಿನಿಂದ ಮಣಿಪಾಲಕ್ಕೆ ಹೋಗಲು ಒಂದೂವರೆಯಿಂದ ಎರಡು ಗಂಟೆ ಬೇಕಾಗಿದ್ದರೆ, ನೇರ ರಸ್ತೆ ಮಾಡಿದಲ್ಲಿ ಮುಕ್ಕಾಲು ಗಂಟೆಯಲ್ಲಿ ತಲುಪಬಹುದು. ಜತೆಗೆ, ನಡುವೆ ಬರುವ ಪ್ರದೇಶಗಳ ಅಭಿವೃದ್ಧಿಯೂ ಸಾಧ್ಯವಾಗಲಿದೆ.
ಈಗಾಗಲೇ ಮುಖ್ಯಮಂತ್ರಿ ನೇತೃತ್ವದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಕಾರದ ಪ್ರಥಮ ಸಭೆ ನಡೆಸಿದ್ದೇವೆ. ಡಿಸೆಂಬರ್ನೊಳಗೆ ಸಮಗ್ರ ಅಭಿವೃದ್ಧಿ ತಯಾರಿಸಿ ಹಂತ ಹಂತವಾಗಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ. ಡಿಸೆಂಬರ್ ಅಂತ್ಯದೊಳಗೆ ಕರಾವಳಿಯ ಎಲ್ಲ ರಸ್ತೆಗಳ ದುರಸ್ತಿಗೆ ಸೂಚನೆ ನೀಡಿದ್ದು, ಸ್ಥಳೀಯಾಡಳಿತಗಳು ಸಕಾರಾತ್ಮಕವಾಗಿ ಸ್ಪಂದಿಸಿ ಕಾರ್ಯೋನ್ಮುಖವಾಗಿವೆ.
ಮುಂದಿನ ದಿನಗಳಲ್ಲಿ ಮಂಗಳೂರು, ಉಡುಪಿ, ಕಾರವಾರದಲ್ಲಿ ಪ್ರಾಕಾರದ ಕಚೇರಿಗಳನ್ನು ತೆರೆಯುತ್ತೇವೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕರಾವಳಿಯನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುತ್ತೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ.
ಬಿ.ನಾಗರಾಜ ಶೆಟ್ಟಿ, ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಪ್ರಾಕಾರ.
ಸೋಮವಾರ, ಅಕ್ಟೋಬರ್ 20, 2008
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ